ನಿಜವಾಗಿಯೂ ತಸ್ಲಿಮಾಳ ‘ದ್ವಿಖಂಡಿತೊ’ ಪುಸ್ತಕದಲ್ಲಿ ಮುಸಲ್ಮಾನರ ಧಾರ್ಮಿಕ ಭಾವನೆಗಳಿಗೆ ನೋವಾಗುವ ಅಂಶವಿದ್ದದ್ದೇ ಆದರೆ ಅದು ಬಿಡುಗಡೆಯಾಗಿ ಅನಾಮತ್ತು ನಾಲ್ಕು ವರ್ಷಗಳ ನಂತರವೇಕೆ ಈ ಹೋರಾಟ, ಹಾರಾಟ? ಅಲ್ಲಿಯವರೆಗೆ ಯಾವ ಮುಸಲ್ಮಾನರ ಧಾರ್ಮಿಕ ನಂಬಿಕೆಗೂ ಪೆಟ್ಟಾಗಿರಲಿಲ್ಲವೇ? ಕಣ್ಣಿಗೆ ಕಾಣುವ ಘಟನೆಯ ಹಿಂದಿನ ರಹಸ್ಯವೇ ಬೇರೆ. ತಸ್ಲಿಮಾಳ ವಿರುದ್ಧ ಘೋಷಣೆ ಕೂಗುತ್ತಾ ಬೀದಿಗಿಳಿದವರಲ್ಲಿ ಅಸಲಿಗೆ ಎಷ್ಟು ಮಂದಿ ಆಕೆಯ ಪುಸ್ತವನ್ನು ಓದಿರಬಹುದು, ಊಹಿಸಿ... ನಂದಿಗ್ರಾಮದಲ್ಲಿ ಮಾರಣಹೋಮವನ್ನೇ ನಡೆಸಿದ ಪಶ್ಚಿಮ ಬಂಗಾಳದ ಸರಕಾರ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ತಸ್ಲಿಮಾಳನ್ನು ನೆಪವಾಗಿ ಬಳಸಿಕೊಂಡಿರಬಹುದಲ್ಲವೇ? ಇಲ್ಲವಾದರೆ ನಂದಿಗ್ರಾಮದ ಕ್ರೌರ್ಯ ಇನ್ನೂ ಹೊಗೆಯಾಡುತ್ತಿರುವ ಸಮಯಕ್ಕೆ ಸರಿಯಾಗಿ ಮುಸ್ಲಿಮರ ಶ್ರದ್ಧೆಗೆ ಘಾಸಿಯಾದದ್ದು ಹೇಗೆ?
ಮತ್ತಷ್ಟು ಓದಿ